#Justice
Target:
GOVT OF KARNATAKA
Region:
India

https://archive.org/details/mysoregazetteerc01rice

https://satyavijayi.com/tracing-real-face-tipu-sultan-literally-not-figuratively/

ಹಿಂದೂ ವಿರೋಧಿ ,ಸ್ತ್ರಿ ಪೀಡಕ , ದೇವಾಲಯಗಳ ಕೆಡವಿದ ಸಮಾಜ ಘಾತುಕನ ಹೆಸರಿನಲ್ಲಿ ಜಯಂತಿ ಮಾಡ ಹೊರಟಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ರಮಕ್ಕೆ ಖಂಡನೆ
ಟಿಪ್ಪು ಒಬ್ಬ ಸರ್ವ ಧರ್ಮ ಸಹಿಷ್ಣು, ರಾಷ್ಟ್ರ ಪ್ರೇಮಿ, ಕನ್ನಡ ಭಾಷಾ ಪ್ರೇಮಿ ಎಂದೆಲ್ಲ ತಿಳಿದುಕೊಂಡಿದ್ದಾರೆ. ಆದರೆ ಅವೆಲ್ಲ ಅಪ್ಪಟ ಸುಳ್ಳುಗಳು..!! ಟಿಪ್ಪುವಿನ ನಿಜ ಬಣ್ಣ ತಿಳಿಯಬೇಕಾದರೆ ನಾವು ಮತ್ತೊಮ್ಮೆ ಇತಿಹಾಸವನ್ನು ಕೆದಕಬೇಕು. ಕೆದಕುತ್ತಾ ಹೋದಂತೆಲ್ಲ ಸಾಕ್ಷ್ಯಗಳು ನಮ್ಮ ಕಾಲನ್ನು ಎಡತಾಕುತ್ತವೆ. ಟಿಪ್ಪುವಿನ ನಿಜವಾದ ಮುಖದ ಅನಾವರಣವಾಗುತ್ತದೆ.ಅವುಗಳಲ್ಲಿ ಕೆಲವನ್ನು ನೋಡೋಣ…
1) ಟಿಪ್ಪು ತನ್ನ ಶ್ರೀರಂಗಪಟ್ಟಣ ಕೋಟೆಯ ಪ್ರವೇಶದ್ವಾರದ ಆಂಜನೇಯ ದೇವಾಲಯವನ್ನು ಕೆಡವಿ ನಿರ್ಮಿಸಿದ ಮಸೀದಿಯ ಶಾಸನ ಹಾಗು ಶ್ರೀರಂಗಪಟ್ಟಣದ ಹಲವು ಪರ್ಷಿಯನ್ ಶಾಸನಗಳಲ್ಲಿ ಹಲವೆಡೆ “ಮುಸ್ಲಿಮೇತರರನ್ನು (ಕಾಫಿರ್) ಕೊಲ್ಲಬೇಕು” ಎಂಬರ್ಥದ ಬರಹಗಳಿವೆ. ಅಂತಹ ಬರಹಗಳಲ್ಲಿ ಒಂದು ಬರಹ ಹೀಗಿದೆ “ಪ್ರವಾದಿಗಳು ಹೇಗೆ ಯುದ್ಧವನ್ನು ಮಾಡಿ ಕಾಫಿರರನ್ನು ಕೊಂದರೋ ಹಾಗೆಯೇ ನೀವುಗಳು ಕೂಡ ಕಾಫಿರರನ್ನು ಕೊಲ್ಲಲು ಯುದ್ಧ ಸಲಕರಣೆಗಳನ್ನು ಹೊಂದಿರಿ.” ಅವನು ಕಿತ್ತುಹಾಕಿಸಿದ ಆಂಜನೇಯನ ವಿಗ್ರಹವನ್ನು ಊರ ಒಳಗೆ ಹೊಸ ದೇವಾಲಯ ಕಟ್ಟಿಸಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಟಿಪ್ಪು ಕಟ್ಟಿಸಿದ ಮಸೀದಿಯ ಕೆಳಭಾಗದಲ್ಲಿ ಇಂದಿಗೂ ಹಿಂದೂ ದೇವಾಲಯದ ಕುರುಹುಗಳು ಸ್ಪಷ್ಟವಾಗಿವೆ.
2) ಇತ್ತೀಚೆಗೆ ವಿಜಯ್ ಮಲ್ಯ ಭಾರತಕ್ಕೆ ವಾಪಾಸು ತಂದ ಟಿಪ್ಪುವಿನ ಖಡ್ಗದ ಮೇಲಿನ ಪರ್ಷಿಯನ್ ಭಾಷೆಯ ಶಾಸನವು ಈ ರೀತಿ ಇದೆ, “ನನ್ನ ವಿಜಯ ಖಡ್ಗ ಎಲ್ಲಾ ಕಾಫಿರರನ್ನು ಕೊಂದು ಪ್ರಕಾಶಿಸುತ್ತದೆ.”
3) 14.12.1788 ರಂದು ಟಿಪ್ಪು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಪತ್ರ, “ನೀನು ಮೀರ್ ಹುಸೇನ್ ಆಲಿ ಜತೆಗೂಡಿ ಅಲ್ಲಾಹುವಿನಲ್ಲಿ ನಂಬಿಕೆ ಇಲ್ಲದ ಎಲ್ಲ ಕಾಫಿರರನ್ನು ಕೊಲ್ಲಬೇಕು.”
4) ಟಿಪ್ಪು 18.01.1790 ರಂದು ಸೈಯದ್ ಅಬ್ದುಲ್ ಮಲಕ್ ಗೆ ಬರೆದ ಮತ್ತೊಂದು ಪತ್ರದ ಸಾರಾಂಶ, ” ಪ್ರವಾದಿ ಮಹಮ್ಮದರ ಕೃಪೆಯಿಂದ ಮತ್ತು ಅಲ್ಲಾಹುವಿನ ದಯೆಯಿಂದ ನಾವು ಕಲ್ಲಿಕೋಟೆಯ (ಈಗಿನ ಕ್ಯಾಲಿಕಟ್) 75 ಶೇಕಡಾ ಕಾಫಿರರನ್ನು ಮತಾಂತರಿಸಿದ್ದೇವೆ.”
5) 22.3.1789 ರಲ್ಲಿ ಕೊಡೆಂಗೇರಿ ಅಬ್ದುಲ್ ಖಾದಿಗೆ ಬರೆದ ಪತ್ರದ ಒಕ್ಕಣೆ, ” ನಾನು 1200 ಕಾಫಿರರನ್ನು ಮತಾಂತರಿಸಿದ್ದೇನೆ. ನೀನು ಎಲ್ಲಾ ನಂಬೂದಿರಿ (ಕೇರಳದ ಬ್ರಾಹ್ಮಣರು) ಮತ್ತು ಇತರರನ್ನು ಮತಾಂತರಿಸು.”
6) ಪ್ರಾರಂಭದಲ್ಲಿ ಟಿಪ್ಪು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದರೂ ನಂತರದಲ್ಲಿ ಪರ್ಷಿಯನ್ ಭಾಷೆಯನ್ನೂ ಆಡಳಿತ ಭಾಷೆಯನ್ನಾಗಿ ತರಲು ಭಾರೀ ಶ್ರಮ ಪಟ್ಟಿದ್ದ. ಆದರೆ ಅದು ಯಶಸ್ವಿಯಾಗದೆ ಹೋದದ್ದು ಕನ್ನಡಿಗರ ಅದೃಷ್ಟ. ಅಂತೆಯೇ ಟಿಪ್ಪುವಿನ ಎಲ್ಲಾ ಶಾಸನಗಳು ಪರ್ಷಿಯನ್ ಭಾಷೆಯಲ್ಲಿಯೇ ಇವೆ.ಯಶಸ್ವಿಯಾಗಿದ್ದರೆ ಇವತ್ತಿಗೆ ಮೈಸೂರು -ನಜರಾಬಾದ್ ಆಗಿರುತಿತ್ತು…! ಐ.ಮಾ ಮುತ್ತಣ್ಣ ಅವರ Tipu Sultan X-rayed ಪುಸ್ತಕದಲ್ಲಿ ಇನ್ನು ೪೦ ಪರ್ಶಿಯನ್ ಹೆಸರುಗಳಿವೆ.
7) ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿಯನ್ನು ಚಿಕ್ಕ ಮನೆಯೊಂದರಲ್ಲಿ ಕೂಡಿಹಾಕಿ ಸರಿಯಾಗಿ ಊಟ ನೀಡದೆ ಸೆರೆಯಿರಿಸಿದ್ದನ್ನು ಶ್ರೀನಿವಾಸ್ ಆಚಾರ್, ನಾರಾಯಣ ಅಯ್ಯಂಗಾರ್ ಅವರುಗಳು ತಮ್ಮ ‘ಮೈಸೂರು ಪ್ರಧಾನ’ ಪುಸ್ತಕದಲ್ಲಿ ವಿವರಿಸಿದ್ದಾರೆ. ರಾಣಿಯು ತನ್ನ ಮದ್ರಾಸಿನ ಪ್ರತಿನಿಧಿ ತಿರುಮಲರಾವ್ ಗೆ ಬರೆದ ಟಿಪ್ಪಣಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ. ಆ ಟಿಪ್ಪಣಿ ಹೀಗಿದೆ “… ಟಿಪ್ಪು ಯಾವ ಕ್ಷಣದಲ್ಲಿ ಬೇಕಾದರೂ ನನ್ನನ್ನು ಕೊಲ್ಲಬಹುದು, ಈಗಾಗಲೇ ಶ್ರೀರಂಗಪಟ್ಟಣದ 700 ಹಿಂದೂ ಕುಟುಂಬಗಳನ್ನು ಹತ್ಯೆ ಮಾಡಿದ್ದಾನೆ…”
ಟಿಪ್ಪು ನಡೆಸಿದ ಮತಾಂತರ, ಹತ್ಯಾಕಾಂಡಗಳು, ದೇಗುಲಗಳ ಧ್ವಂಸ ಶ್ರೀರಂಗಪಟ್ಟಣ, ಮೈಸೂರು ಪ್ರದೇಶಕ್ಕಿಂತ ಕೊಡಗು, ಮಲಬಾರ್ ನಲ್ಲೇ ಹೆಚ್ಚು. ಮೆನನ್ ಎಂಬ ಲೇಖಕರು ಬರೆದ ಕೇರಳದ ಚರಿತ್ರೆ ಪ್ರಕಾರ ಟಿಪ್ಪು ಪ್ರಜೆಗಳ ಮುಂದೆ ಇದ್ದ ಆಯ್ಕೆ ಎರಡು- ಕುರಾನ್ ಮತ್ತು ಖಡ್ಗ.!!! ಮತಾಂಧನಾಗಿದ್ದ ಟಿಪ್ಪು ನಾಶ ಮಾಡಿದ ದೇಗುಲಗಳಿಗೆ ಲೆಕ್ಕವಿಲ್ಲ. ಹಾಗೆಯೇ ಆತ ಮಾಡಿದ ನರಮೆಧಗಳಿಗೂ! ಈ ಬಗ್ಗೆ ವಿಸ್ತೃತ ವಿವರಗಳು ಹಾಗು ಸಾಕ್ಷ್ಯಗಳ ಬಗೆಗೆ ಎಚ್.ಡಿ.ಶರ್ಮ ಅವರು ಬರೆದ ‘ದ ರಿಯಲ್ ಟಿಪ್ಪು’ ಕೃತಿಯಲ್ಲಿ ಓದಬಹುದು.
ಟಿಪ್ಪು ಪರ-ವಿರೋಧವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಈ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಟಿಪ್ಪು ಒಬ್ಬ ಕಟುಕ,ಮತಾಂಧ, ಹಿಂದೂ ಕ್ರಿಶ್ಚಿಯನ್ ವಿರೋಧಿ, ಕನ್ನಡ ಭಾಷಾ ವಿರೋಧಿ ಎಂಬುದು ಸಾಬೀತಾಗುತ್ತದೆ. ಅವನ ಉದ್ಧೇಶ ತನ್ನ ಆಳ್ವಿಕೆಯ ಪ್ರದೇಶವನ್ನು ಇಸ್ಲಾಮೀಕರಣಗೊಳಿಸುವುದಾಗಿತ್ತು. ಕೆಲವು ಸಾಹಿತಿಗಳು, ಬುದ್ಧಿ ಜೀವಿಗಳು ನಿಜವಾದ ಇತಿಹಾಸ ಅರಿಯದೆ ಟಿಪ್ಪುವನ್ನು ಸ್ವಾತಂತ್ರ ಹೋರಾಟಗಾರ, ಸರ್ವಧರ್ಮ ಸಹಿಷ್ಣು ಎಂದು ವರ್ಣಿಸುತ್ತಾರೆ. ಅದಕ್ಕೆ ಅವರುಗಳು ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ಮಠ ದೇಗುಲಗಳಿಗೆ ದತ್ತಿ ನೀಡಿದ್ದನ್ನು ಉದಾಹರಣೆಯಾಗಿ ಕೊಡುತ್ತಾರೆ. ಆದರೆ ಇಲ್ಲಿ ಸತ್ಯ ಬೇರೆಯದೇ ಇದೆ. ಸ್ವತಃ ಟಿಪ್ಪುವಿನ ಮಗ ಹೇಳುವಂತೆ ಜಾತಕದಲ್ಲಿ ನಂಬಿಕೆಯಿದ್ದ ಟಿಪ್ಪು ತಾನು ಮಾಡಿದ ನರಮೇಧ, ಬಲವಂತದ ಮತಾಂತರ, ದೇಗುಲ ದ್ವಂಸ ಗಳಂತಹ ಪಾಪಗಳ ಕಂಟಕ ನಿವಾರಣೆಗಾಗಿ ಹಣ, ದತ್ತಿ ನೀಡಿ ಬ್ರಾಹ್ಮಣರಿಂದ ಯಜ್ಞ ಯಾಗ ಮಾಡಿಸುತ್ತಿದ್ದ. ಇಂತಹ ಸ್ವಾರ್ಥ ಉದ್ಧೇಶಕ್ಕೆ ಟಿಪ್ಪು ಶೃಂಗೇರಿ ಹಾಗು ಮೇಲುಕೋಟೆ ದೇಗುಲಗಳಿಗೆ ನೀಡಿದ ದತ್ತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ.ಅನ್ಯ ಧರ್ಮದ ದೇಗುಲಗಳಿಗೆ ದತ್ತಿ ನೀಡಿ ಇನ್ನೊಂದು ಕಡೆ ಅದೇ ಧರ್ಮದ ದೇಗುಲಗಳನ್ನು ಕೆಡುವುದು ಸಹಿಷ್ಣುತಯೇ?
ಬಗರ್ ಹುಕುಂ . ಪೌತಿ ಖಾತೆ , ಜಮಾ , ಜಮಾಬಂದಿ , ದಫೇದಾರ , ಠಿಕಾಣಿ . ಮುಕ್ಕಾಮ್ . ಜರೂರು . ದೌಲತ್ತು . ಮಸಲತ್ತು ಹೀಗೆ ನೂರಾರು ಪರ್ಶಿಯನ್ ಪದಗಳು ಆಡಳಿತ ಕನ್ನಡದಲ್ಲಿ ನಮಗರಿವಿಲ್ಲದಂತೆ ಸೇರಿ ಹೋಗಿವೆ , ಇದು ಟಿಪ್ಪುವಿನ ಕನ್ನಡ ಪ್ರೇಮವೇ ?
ಇಂತಹ ಒಬ್ಬ ಮತಾಂದನ ಜಯಂತಿ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡಹೊರಟಿರುವ ಸರ್ಕಾರದ ಕ್ರಮಕ್ಕೆ ಕನ್ನಡಿಗರ ಆನ್ ಲೈನ್ ಹೋರಾಟ ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ... ಟಿಪ್ಪು ಜಯಂತಿ ಬೇಡವೇ ಬೇಡ
ಸಿ.ಟಿ ಮಂಜುನಾಥ್
ಮಂಡ್ಯ ​

GoPetition respects your privacy.

The SAY NO TO TIPPU JAYANTI petition to GOVT OF KARNATAKA was written by C.T Manjunath and is in the category Justice at GoPetition.